ಶಿಲ್ಪಾಶ್ರೀನಿವಾಸ್ ಚಿತ್ರಕ್ಕೆ ಕುಂಬಳಕಾಯಿ

ಸ್ನೇಹಾಲಯಂ ಕ್ರಿಯೇಷನ್ಸ್ ಬ್ಯಾನರ್ ನ ಅಡಿಯಲ್ಲಿ ನಿರ್ಮಾಣವಾಗುತ್ತಿರುವ
ಶ್ರೀನಿವಾಸ್ ಚಿತ್ರದ ಚಿತ್ರೀಕರಣ ಯಶಸ್ವಿಯಾಗಿ ಮುಗಿದಿದೆ.

ಬಂಗಾರಪೇಟೆ ತಾಲ್ಲೂಕಿನ ಶ್ರೀ ಶಿವಶನೈಶ್ಚರ ದೇವಾಲಯದಲ್ಲಿ ಫ್ಯಾಮಿಲಿ ಸ್ಟಾರ್ ಅಭಿಜಿತ್ ರವರು “ದೇವರು ಸೃಷ್ಠಿಸೋ ಸಿನಿಮಾದಲ್ಲಿ ನಾವೆಲ್ಲಾ ಪಾತ್ರದಾರಿಗಳು”,ಎಂಬ ಹಾಡಿಗೆ ಹೆಜ್ಜೆ ಹಾಕುವುದರ ಮೂಲಕ ಚಿತ್ರೀಕರಣ ಮುಕ್ತಾಯವಾಯಿತು.

ಹಾರರ್ ಸಸ್ಪೆನ್ಸ್ ಥ್ರಿಲ್ಲರ್ ಕಥಾವಸ್ತು ವಿರುವ ಶಿಲ್ಪಾ ಶ್ರೀನಿವಾಸ್ ಚಿತ್ರದಲ್ಲಿ
ಅಭಿಜಿತ್.ಶಿಲ್ಪಾ ಶ್ರೀನಿವಾಸ್.ಶೋಭರಾಜ್.ನಾಗೇಂದ್ರ ಅರಸ್. ಕಿಶೋರ್ ಕಾಸರಗೋಡು.ಸ್ವಾತಿ ಲಿಂಗರಾಜ್.ಪ್ರಿಯ.ಪಂಚಾಕ್ಷರಯ್ಯ.ಮರಿಸ್ವಾಮಿ.ಅಮೃತ ಕಾಳೆ,ಶಂಖನಾದ ಆಂಜಿನಪ್ಪ.ಮಾಸ್ಟರ್ ವೀರ ಧನುಷ್.ಅನ್ನಪೂರ್ಣ.ನಂದಿನಿ ಕಮ್ಮಯ್ಯ.ಧನ್ಯ ಭೂಮಿಕಾ ಶ್ರೀ.ಬೇಬಿ ಶಾರಿಕಾ ಕಾರ್ತೀಕ್.ಬೆಂಗಳೂರು ಮನೋ,ಲಷಿಕ ಮನೋ ಮೊದಲಾದವರು ನಟಿಸಿದ್ದಾರೆ., ಶಿಲ್ಪಾ ಶ್ರೀನಿವಾಸ್ ಚಿತ್ರಕ್ಕೆ ರಾಜೀವ್ ಕೃಷ್ಣ ಕಥೆ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ಸಾಹಸ ಮತ್ತು ನೃತ್ಯ ನಿರ್ದೇಶನದ ಹೊರೆ ಹೊತ್ತಿರುವುದು ವಿಶೇಷ.
ಪ್ರಮೋದ್ ರವರ ಛಾಯಾಗ್ರಹಣ.ಡಿ ಮಲ್ಲಿ ಸಂಕಲನ, ಅನಿರುದ್ಧ ಶಾಸ್ತ್ರಿ ಸಂಗೀತ.ಪ್ರತಾಪ್ ಭಟ್ ಸಾಹಿತ್ಯ, ಪ್ರವೀಣ್ ಭದ್ರಾವತಿ ಹಾಗು ಮಲ್ಲಿ ಕೆ ವಡ್ಡರಹಟ್ಟಿ ಸಹ ನಿರ್ದೇಶನ. ಇರುವ ಶಿಲ್ಪಾ ಶ್ರೀನಿವಾಸ್ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು.
ಮೇ ತಿಂಗಳ ಮೊದಲ ವಾರದಲ್ಲಿ ಸಿನಿಮಾವನ್ನು ತೆರೆಗೆ ತರಲು ಚಿತ್ರತಂಡ ಯೋಜನೆ ರೂಪಿಸಿದೆ.

Leave a Reply

Your email address will not be published.